ಭಾನುವಾರ, ಆಗಸ್ಟ್ 30, 2015

ಶೀಘ್ರದಲ್ಲಿ ನಗಾರಿ ನಾದ.....

  ಮನದಾಳದ ತವಕಕ್ಕೆ, ಹಲವು ವರ್ಷಗಳ ಯೋಚನೆಗೆ  ಈಗ ಕೂಡಿದೆ ಸಮಯ, ಹೂಡುತಿದೆ ಯೋಜನೆ. ಅಂತರ್ಜಾಲದಲ್ಲಿ ಕನ್ನಡದ ಸವಿನುಡಿಯ ಸೊಬಗ ಬೆಳಗಿಸಲು, ಉಸಿರನ್ನು ಹಸಿರಾಗಿಸುವ ಚಿಂತನೆಗೆ  “ನಗಾರಿ”ಯ ನಾದದ  ಜೇಂಕಾರ ಇನ್ನೂ ಎರಡೇ ದಿನದಲ್ಲಿ  ಅಂತರ್ಜಾಲವ ಪ್ರವೇಶಿಸಲಿದೆ.
         
        ಮನದಾಳದ ಮಾತಿಗೆ “ಅಂತರಂಗದ ಮೃದಂಗ”, ಬಾಲರ ಚಿಲಿಪಿಲಿ ನಾದಕ್ಕೆ “ಮಕ್ಕಳ ಧ್ವನಿ”, ಸಾಧನೆಯ ಅಭಿವ್ಯಕ್ತಿಗೆ “ಶಿಕಾರಿ”, ಕನ್ನಡದ ಮೊಜಲುಗಳಿಗೆ “ಹೊಂಗಿರಣ”, ಇನ್ನು ಅನೇಕ ಅಂಕಣಗಳನ್ನು  ಹೊತ್ತುಬರುತ್ತಿರುವ ಈ ನಗಾರಿ ನುಡಿಲೋಕಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ....
                          ಶೀಘ್ರದಲ್ಲಿ ನಗಾರಿ ಶ್ರುತಿ ಕೇಳಿಸುವೆ...

       - ಮನಿ        

ಶುಕ್ರವಾರ, ಡಿಸೆಂಬರ್ 19, 2014

ಕನಸುಗಳ ಬೆನ್ನೆಟ್ಟುವ ಸೆಲೆಗೆ “ಡಿ2ಡಿ”

       ಕಲಿಕೆ ಜೀವನ ಪರ್ಯಂತ ಸಾಗುವ ದಿಗಂತದ ಹೊಂಗಿರಣ. ಇದರಲ್ಲಿ ಸಾರ್ಥಕತೆ ಮರಳುಗಾಡಿನಲ್ಲಿ ಜೀವಾಮ್ರತವ ಹುಡುಕುವ ಪರಿ, ಅನೇಕ ಸೋಲು, ಗೆಲುವಿನ ಹೆಜ್ಜೆಯೇ ಗಮ್ಯದೆಡೆಗಿನ ರೋಮಾಂಚನಕಾರಿ ಪಯಣಕ್ಕೆ ಪಡಿನೆರಳಿನ     ಹಾಸುಗಲ್ಲಾಗಿ, ವಿಜಯೀ ಪತಾಕೆಯ ಗಗನಚುಂಬಿಸಿ ಅನಾವರಣಗೊಳಿಸುತ್ತದೆ. ಆ ಇಮ್ಮಡಿಗೆ ಸ್ಪೂರ್ತಿ ಮರದಲ್ಲಿ ನಾನಾ  ರೆಂಬೆ-ಕೊಂಬೆಗಳಂತೆ, ಹೆಸರಿಗೆ ನೂರರ ಪಂಕ್ತಿ, ಈ ಹತ್ತರಲ್ಲೊಂದು ಕನಸು ಕಾಣುತ್ತ, ನನಸಿನ ಹಾದಿಗೆ ಮಾನವೀಯ ಸೆಲೆಯ ಸ್ಪರ್ಶಿಸುತ್ತಾ ಅರಳುತ್ತಿರುವ ನಂದಕುಸುಮವೇ “ಡಿ2ಡಿ”.
    
        ಹೆಸರಿಗೆ ಬೆಲ್ಲದಂತೆ ಅಚ್ಚುಕಟ್ಟಾದರು, ಸೊಗಸು ಅದರ ಸವಿಗೆ ಸಮಾನ. ಕನಸುಗಳನ್ನೇ ಬೆನ್ನೆಟ್ಟುವ ಸೆಲೆಯಿಂದ ಜನಸಾಮಾನ್ಯರ ಮಧ್ಯದಲ್ಲಿ ಅರಳಿದ ಹೂವು “ಡಿ2ಡಿ”, ಅಂದರೆ “ಡೆರ್ ಟು ಡ್ರೀಮ್”. ಬೆಂಗಳೂರಿನಲ್ಲಿ ಇತ್ತಿಚಿಗೆ ತಲೆಯೆತ್ತಿ ಸಾಧನೆಯ ಶಿಖರದಲ್ಲಿ ಮೆರೆಯುತ್ತಿರುವ ಹಸಿಗೂಸಿನ ಜನಕ ಶ್ರೀಯುತ ರಾಘವೇಂದ್ರ ಎನ್, ಇಂಜಿನಿಯರಿಂಗ್ ಪದವಿದರರಾದ ಇವರು ಸಾಫ್ಟ್ವೇರ್ ಕಂಪನಿಯ ಉದ್ಯೋಗದ ಅವಲಂಬನೆಯ ಸದಾವಕಾಶ ಮಡಚಿಟ್ಟು ಕನಸಿನ ಕೂಸನ್ನು ನನಸಿನ ಪಯಣಕ್ಕೆ  ಮಣೆ ಹಾಕಿದ ಆಶಾವಾದಿ. ಬೇರೆಯವರ ಕನಸಿಗೆ, ಗಮ್ಯದ ಸುಳಿವನ್ನು  ನೀಡುತ್ತಾ  ಸಾಲು ಸಾಲು ಮಾನವ ಗೋಪುರವ ಉತ್ತುಂಗಕ್ಕೆ ಏರಿಸಿದ ಹೆಗ್ಗಳಿಕೆ ಇವರದು.


  
      ಹೆಮ್ಮೆಯ ಮಾತುಗಾರ,  ಕನಸುಗಳ ಮೂಟೆ ಹೊತ್ತ ತರಬೇತುದಾರ, ಸದಾ ನಗುಮೊಗದ ಮಾನವೀಯತೆಯ ಚಿಲುಮೆ, ನಿನ್ನೆಯ ಕನಸುಗಳ ಮೇಲೆ, ನಾಳಿನ ನನಸುಗಳ ಬುನಾದಿಯ ಮೆಟ್ಟಿಲು ಕಟ್ಟಿಸುವ ಅಸಮಾನ್ಯ ಶಿಲ್ಪಿ ಶ್ರೀಯುತ ರಾಘವೇಂದ್ರ ಎನ್,  ಅವರು ತಮ್ಮ ಜೀವನದ 40ನೇ ಅಧ್ಯಾಯಕ್ಕೆ ಕಾಲಿಟ್ಟ ಈ ಶುಭ ಸಂದರ್ಭದಲ್ಲಿ  ಜನುಮ ದಿನದ ಹಾರ್ದಿಕ ಶುಭ ಕಾಮನೆಗಳು...

ಬುಧವಾರ, ಅಕ್ಟೋಬರ್ 15, 2014

"Adhbuta"


      D2D Adhbuta Camp  (B-2) journey in  single frame...           
                         
                                                                                                                 









ಮಂಗಳವಾರ, ಅಕ್ಟೋಬರ್ 14, 2014

ಸದನ

ಸದನದಲ್ಲಿ ತುಂಬಿದೆ ಭರವಸೆಯ ಜೀವನ

ಜನಮನಗಳ ಆನಂದದ ಆವರಣ|
ಮನಸ್ಸಿನ ಭಾವನೆಗಳ ಬೆಳವಣಿಯ ನಿರ್ಮಾಣ
ಜೀವ ಜೀವಗಳ ಸಂತಸದ ಭವನ|
ವ್ಯಕ್ತಿಯ ವ್ಯಕ್ತಿತ್ವಗಳ ನಂಬಿಕೆಗಳೇ ಪ್ರಧಾನ
ಹೊಸ ಬದುಕನ್ನು ರೂಪಿಸಿಕೊಳ್ಳುವ ಸಂಶೋಧನ|
ವಿಚಾರ ವಿನಿಮಯಗಳ ಸಂಕಷ್ಟದ ವಾತಾವರಣ
                                                     ವಾದ ವಿವಾದಗಳನ್ನು ಮುಂದೂಡುವ ಕದನ
                        ಬೆಸೆದ ಸಂಭಂಧಗಳ ಒಗ್ಗಟ್ಟಿನ ತಾಣ
                      ಭರವಸೆ ವಿಶ್ವಾಸ ನಂಬಿಕೆಗಳ ಖಜಾನ

                    ಜೊತೆಗಾರರ ಬದುಕಿನ ಸಾಧನೆಗಳೇ ಸ್ಪಂದನ||

ಸೌಮ್ಯ ಜೋಷಿ,
ಇಂಜಿನಿಯರಿಂಗ್ ವಿದ್ಯಾರ್ಥಿನಿ,
ಎಸ್.ಎಲ್.ಏನ್. ಕಾಲೇಜು ,
ರಾಯಚೂರು
                                                                                                                                 
                                                                                             ಕವಯತ್ರಿ-